ಪರಸ್ಪರ ಮಾತು

 

ಪ್ರಿಯೆ,
ನಿನ್ನ ಆಶೆ‌ಆಕಾಂಕ್ಷೆಗಳು ಗರಿಗೆದರುವ ಕಾಲಕ್ಕೆ
ನಾನು ತೀರದ ಹತ್ತಿರ ನಡೆದು ಬಂದಿದ್ದೆ.
ಆಗ ಸೂರ್ಯ ಹಿಮ್ಮುಖವಾಗಿ ಉದಯಿಸುತ್ತಿದ್ದನೆಂದೇ ಹೇಳಬಹುದು.

ಕಪ್ಪುಬಂಡೆಗಳನ್ನು ಹೊಡೆದುರುಳಿಸಬಲ್ಲ ಸ್ವಚ್ಛತೆಯ ಅಲೆಗಳು,
ನಿರ್ಜೀವ ಹೆಣದಂತೆ ಸಂಕಟವನ್ನು ಉಗಿಯತೊಡಗಿದ್ದವು
ಸಮುದ್ರದ ಮೇಲೆ.

ನೀನು ಸುಖಿಸುತ್ತಿದ್ದುದರ ಸಾರ್ಥಕತೆ, ಹದಗೆಟ್ಟು ಶೂನ್ಯವಾದ
ನನ್ನ ನೆಚ್ಚಿನ ತಾರುಣ್ಯ ಹಾಗೂ ಶಿಲೆಯಂತೆ ಪ್ರಬಲಗೊಳ್ಳುತ್ತಿರುವ
ರೋಗಗ್ರಸ್ಥ ದೇಹ;

ಇಲ್ಲಿ ನನ್ನದೆನ್ನುವ ಯಾವುದೇ ವಸ್ತುಗಳು, ಘರ್ಷಣೆ, ಸಂಬಂಧಗಳು
ಮತ್ತು ನಿನ್ನ ಸಮಾಧಿಯೂ ಒಳಗೊಂಡಂತೆ ಏನೊಂದು ಉಳಿಯಲಾರದು.

ಏಕೆಂದರೆ,
ನಾನೀಗ ನೆಮ್ಮದಿಯಿಂದ ಜೀವಿಸಬಲ್ಲೆನಾದರೂ ಬದುಕಲಾಗಲಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಲಾವಿಯನು ನೋಡುವ
Next post ಚರಮ ಗೀತೆಯಲ್ಲೊಂದು ಅಳುಕು..

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

cheap jordans|wholesale air max|wholesale jordans|wholesale jewelry|wholesale jerseys